

5th September 2025

ಕುಷ್ಟಗಿ ತಾಲೂಕಿನ ಹಿರೇಮನ್ನಾಪೂರ ಗ್ರಾಮದಲ್ಲಿ ಲಿಂಗೈಕ್ಯ ಪರಮಪೂಜ್ಯ ಶ್ರೀ ಶಂಕರಲಿಂಗ ಗುರುವರ್ಯರ 41 ನೇ ಪುಣ್ಯತಿಥಿ, ಜಾತ್ರಾ ಮಹೋತ್ಸವದ ಅಂಗವಾಗಿ ದಿನಾಂಕ 3-9-2025 ರಿಂದ 13-9-2025 ರ ವರೆಗೆ ಧಾರ್ಮಿಕ ಕಾರ್ಯಕ್ರಮಗಳು ಅನವರತ 11 ದಿನಗಳವರೆಗೆ ನಡೆಯುತ್ತಿದೆ.
ಗುರುವಾರ ದಿನಾಂಕ: 4-9-2025 ರಂದು ನಡೆದ ಎರಡನೇ ದಿನದ ಪುರಾಣದಲ್ಲಿ ಪರಮ ಪೂಜ್ಯ ಶ್ರೀ ಕೇಶವಾನಂದ ಶ್ರೀಗಳು ಶಿದ್ದರೂಡ ಬಸವ ಆಶ್ರಮ ಹಾಗೂ ಶ್ರೀ ಶಿವಾಚಾರ್ಯ ಶ್ರೀಗಳು ಗಿನಿವಾರ ಇವರು
ಸಸಿಗೆ ನೀರು ಹಾಕುವುದರ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು.
ಇದೇ ವೇಳೆ ಪೂಜ್ಯರಿಗೆ ಗೌರವಿಸಿ ಸನ್ಮಾನಿಸಲಾಯಿತು.
ನಂತರ ನವ ದುರ್ಗೆಯರ ಪಾದ ಪೂಜೆಯು ಅತ್ಯಂತ ಶ್ರದ್ಧಾ ಭಕ್ತಿಯಿಂದ ನಡೆಯಿತು.
ಈ ಸಂದರ್ಭದಲ್ಲಿ ಶ್ರೀ ಗುರು ಶಂಕರಲಿಂಗ ಮಠ ಹಿರೇಮನ್ನಾಪೂರದ ಗೌರವಾಧ್ಯಕ್ಷರಾದ ಹಾಗೂ ಧರ್ಮಾಧಿಕಾರಿಗಳಾದ ಬಾಲಚಂದ್ರಪ್ಪನವರು ಹಾಗೂ ಪರಮ ಪೂಜ್ಯ ಶ್ರೀ ಕೇಶವಾನಂದ ಶ್ರೀಗಳು ಶಿದ್ದರೂಡ ಬಸವ ಆಶ್ರಮ, ಶ್ರೀ ಶಿವಾಚಾರ್ಯ ಶ್ರೀಗಳು ಗಿನಿವಾರ, ನಾಗರಾಜ್ ಜಿಗಜಿನ್ನಿ, ಶರಣಪ್ಪ ಮ್ಯಾಗೇರಿ,
ಶಿವಾನಂದ ಗುರುಗಳು ಸೇರಿದಂತೆ ಇತರರಿದ್ದರು.
ಭೀಮಸೇನರಾವ್ ಕುಲಕರ್ಣಿ, ಜಿಎಂ ನ್ಯೂಜ್ ಕುಷ್ಟಗಿ.
ಹಿರೇಮನ್ನಾಪೂರ ಗ್ರಾಮದಲ್ಲಿ ಗುರುವಾರ ಎರಡನೇ ದಿನದ ಪುರಾಣ ಕಾರ್ಯಕ್ರಮ ಉದ್ಘಾಟನೆಯು ಸಸಿಗೆ ನೀರು ಹಾಕುವುದರ ಮೂಲಕ ಚಾಲನೆ ನೀಡಲಾಯಿತು. ನಂತರ ನವ ದುರ್ಗೆಯರ ಪಾದ ಪೂಜೆಯು ಶೃದ್ದಾ ಭಕ್ತಿಯಿಂದ ನಡೆಯಿತು.

ನೀರು ಬಳಕೆದಾರರ ಸಂಘಗಳು ಕಡೇ ಭಾಗದ ರೈತನಿಗೆ ನೀರು ತಲುಪಿಸುವಲ್ಲಿ ಮಹತ್ತರ ಪಾತ್ರ ವಹಿಸಿಲಿ:ಮಧು ಜಿ.ಮಾದೇಗೌಡ

ಶ್ರೀ ಬನ್ನಿ ಮಹಾಂಕಾಳಿ ದೇವಿಯ ಮಹಾಭಿಷೇಕದ ಪ್ರಯುಕ್ತ ಸರ್ವಧರ್ಮಗಳ 43 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ

ಶ್ರೀಮತಿ ರಶ್ಮಿ ಪ್ರಶಾಂತ ಕುಲಕರ್ಣಿ ಇವರಿಂದ ಕನ್ನಡ ರಾಜ್ಯೋತ್ಸವ ಕುರಿತು ಕವನ ರಚನೆ

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಚಳಗೇರಾ ಗ್ರಾಮದಲ್ಲಿ ಇಂದು 15 ನೇ ದಿನಾಂಕ ಬುಧುವಾರ ಹಾಗೂ ನಾಳೆ 16 ನೇ ದಿನಾಂಕ ಗುರುವಾರ ಪುಣ್ಯಸ್ಮರಣೋತ್ಸವದ ಹಾಗೂ ಶ್ರೀ ಮಠದ ಉದ್ಘಾಟನೆ.